ಬುಧವಾರ, ಡಿಸೆಂಬರ್ 31, 2008

ಪಾಂಗಳ ದಿಂದ ಪಿ.ಪಿ.ಸಿ.

ನನಗೆ ಇದು ಹೊಸ ರೀತಿಯ ಅನುಭವ. ಅಂದರೆ ನಮ್ಮ ಮನಯಿಂದ ಬಸ್ ನಿಲ್ದಾಣ, ಅಲ್ಲಿಂದ ಬಸ್ನಲ್ಲಿ ಹೋಗುವುದು ಪ್ರತಿದಿನವೂ ನವೀನ ಅನುಭವ. ೧೦ km ಪಯಣ ನನ್ನ ಚಿಂತನೆಯನ್ನು ಸ್ವತ್ರಂತ್ರತೆಯತ್ತ ಕೊಂಡೊಯ್ಯುವ ದಾರಿಯಾಗಿಬಿಟ್ಟಿತು.

ಆರಂಭದಲ್ಲಿ ಮನೆಯಿಂದ ರಸ್ತೆಯ ನಡುವಿನ ಚಿಕ್ಕ ಹಾಡಿಯನ್ನು ದಾಟುವುದೇ ಭಯವನ್ನು ಎದುರಿಸಿ ನಿಲ್ಲುವ ಮೊದಲ ಹೆಜ್ಜೆ ಆಗಿತ್ತು. ಒಂಟಿಯಾಗಿ ಅ ಹಾಡಿಯ ಹಾದಿಯಲ್ಲಿ ೧೦-೨೦ ಹೆಜ್ಜೆ ಯಾರ ದಾಟುವುದನ್ನು ಅರಗಿಸಿ ಕೊಳ್ಳ ಬೇಕಾಗಿತ್ತು . ನನ್ನೊಂದಿಗೆ ಮತ್ತೊಬ್ಬರು ಬೇಕೆನಿಸುತಿತ್ತು. ಆದರೆ ನಂತರದಲ್ಲಿ ನಾನು ಒಂಟಿತನವನ್ನು ಹಿಮ್ಮೆಟ್ಟಿಸುವ ಮಾರ್ಗವನ್ನು ಕಂಡುಕೊಂಡೆ. ಅಲ್ಲಿಂದಲೇ ಹೊಸ ವಿಚಾರಗಳ ಬಗ್ಗೆ ಚಿಂತಿಸುವುದು, ಅದರೊಂದಿಗೆ ಯಾವುದಾದರು ಹಾಡು ಹೇಳಿಕೊಂಡು ಹೋಗಲು ಆರಂಭಿಸಿದೆ. ಇದರಿಂದ ನನಗೆ ಅನೇಕ ವಿಷಯಗಳ ಬಗ್ಗೆ ಹೊಸ ಯೋಚನೆಗಳು ಮಾಡುತ್ತಿದ್ದವು. ಅದಲ್ಲದೆ ಹಾಡು ಹೇಳುವುದರಿಂದ ನನ್ನ ಸಂಗೀತ ಅಭ್ಯಾಸವು ಸಾಧ್ಯವಾಯಿತು. ಹಸಿರು ವನರಾಶಿಯ ನಡುವೆ ಎದೆಯಾಳದಿಂದ ಹಾಡು ಬರುವುದೇ ನನಗೆ ರೋಮಾಂಚನ ನೀಡಲಾರಂಭಿಸಿತು. ನಮ್ಮ ದೇಶ ಎಂತಹ ಹಸಿರು ಸಂಪತ್ತನ್ನು ಹೊಂದಿದೆ ಎಂದು ಹೆಮ್ಮೆಯಗುತಿತ್ತು. ಕೊನೆಗೆ ಆ ಭಯಂಕರ ಹಾಡಿ ನನ್ನ ದೈನಂದಿನ ಜೀವನದ ಒಂದು ಸುಂದರ ಭಾಗವಾಯಿತು. ಆದರೆ ಈ ಸುಂದರತೆಗೆ ದೃಷ್ಟಿ ಬಿದ್ದಿತು. ಒಂದು ದಿನ ಸಾಯಂಕಾಲ ಕೆಲವೊಂದು ಮರಗಳು ಜೀವ ಕಳೆದು ಕೊಂಡು ಧರೆಶಾಯಿಯಾಗಿದ್ದವು. ತುಂಬ ಬೇಸರವಾಯಿತು. ಹಸಿರೆ ನಮ್ಮ ಉಸಿರಾಗಿರುವಾಗ ಅದನ್ನೇ ನಾಶಪಡಿಸುವ ಜನರ ಕ್ರೂರ ಮನಸ್ಸನ್ನು ಕಂಡು ಕೋಪವು ಬಂದಿತು. ಆದರೆ ನಾನು ಆ ಸಂದರ್ಭದಲ್ಲಿ ಅಸಹಯಕಾಳಗಿದ್ದೆ. ಇಂಥಹ ಅಸಹಾಯಕತೆಗಳನ್ನು ಮೌನವಾಗಿ ಅನುಭವಿಸುವುದನ್ನು ಅಭ್ಯಾಸ ಮಾಡಿಕೊಳ್ಳದೆ ಬೇರೆ ದಾರಿಯು ಸದ್ಯಕ್ಕೆ ಕಾಣುತ್ತಿಲ್ಲ! ಆದರೆ ಎಲ್ಲಿಯವರೆಗೆ ಈ ಅಭ್ಯಾಸ?

ನಂತರ ಬಸ್ನಲ್ಲಿ ಕಾಲೇಜ್ ಗೆ ಹೋಗುವುದು ನನ್ನ ಜೀವನದಲ್ಲೇ ಹೊಸತು. ಬಾಲ್ಯದಿಂದ ನನ್ನ ಶಾಲೆ ಸಮೀಪದಲ್ಲೇ ಇದ್ದುದರಿಂದ ನನಗೆ ಈ ಪ್ರಯಾಣದ ಅನುಭವವಿರಲಿಲ್ಲ. ಆರಂಭದಲ್ಲಿ ನನಗೆ ಭಯ ಕಾಡತೊಡಗಿತ್ತು. ಅಷ್ಟೆ ಅಲ್ಲದೆ ಒಂದು ರೀತಿಯ ಹಿಂಜರಿಕೆ ಇತ್ತು. ಈ ಭಯ ಹಿಂಜರಿಕೆಗಳೇ ಅ ಬಸ್ ಪಯಣದ ಅನುಭವನ್ನು ಆವರಿಸಿಬಿಟ್ಟಿತ್ತು. ಮತ್ತೆ ಆಗ ನಾನು ಒಬ್ಬಳೇ ಆಗಿದ್ದರಿಂದ ಮಾತಾಡಲು ಯಾರೊಬ್ಬರು ಸಿಗುತ್ತಿರಲಿಲ್ಲ. ಇತರರು ಅವರ ಗೆಳೆಯ-ಗೆಳತಿಯರೊಂದಿಗೆ ಮಾತನಾಡುವಾಗ ನಾನೆಲ್ಲೋ ಆ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇನೆ ಅನಿಸುತಿತ್ತು. ಅದೇ ಮುಂದೆ ನನ್ನಲ್ಲಿ ಏಕಾಂಗಿತನದ ಭಾವನೆಯನ್ನು ಮತ್ತಷ್ಟು ವ್ರುದ್ಧಿಗೊಲಿಸಿತು. ಇದಕ್ಕೆ ತಾತ್ಕಾಲಿಕವಾಗಿ ಕಂಡುಕೊಂಡ ಪರಿಹಾರವೆಂದರೆ ನನ್ನ ಗೆಳತಿ ಬರುವ ಬಸ್ನಲ್ಲಿ ಬರುವುದು. ಇದರಿಂದ ನನಗೆ ಒಂಟಿತನ ದೂರವಾಯಿತು. ಅಲ್ಲದೆ ಬಸ್ನಲ್ಲಿ ಅವಳೊಂದಿಗೆ ಹೆಚ್ಚಿನ ವಿಷಯಗಳನ್ನು ಹಂಚಿಕೊಂಡಿದ್ದರಿಂದ ನನಗೆ ಅದಲು. ಆಗಿನಿಂದ ನನ್ನಲ್ಲಿ ಬಸ್ ಪ್ರಯಾಣದ ಬಗ್ಗೆ ಒಲವು ಮಾಡಿತು.

ಆದರೆ ಇಲ್ಲಿಗೆ ಮಾನಸಿಕ ಕ್ಲೇಶಗಳು ಮುಗಿಯಲಿಲ್ಲ. ಬಸ್ನಲ್ಲಿ ಅನೇಕ ಹುಡುಗರು ಜೋರಾಗಿ ಮಾತಾಡುತ್ತಾ, ಹುಡುಗಿಯರ ಕಡೆ ನೋಡಿ ಜೋರಾಗಿ ನಗುತ್ತಿದ್ದರು, ಆಗ ನನ್ನಲ್ಲಿ ನನ್ನ ಬಗ್ಗೆ ಕೀಳರಿಮೆ ಮೂಡಲು ಆರಂಭವಾಯಿತು. ಅಂದರೆ ನನ್ನ ಡ್ರೆಸ್ ಬಗ್ಗೆ ನಗುತ್ತಿರಬಹುದೆಂದು ಭಾವಿಸಿ ಖಿನ್ನಳಗುತ್ತಿದ್ದೆ. ಮನೆಯಲ್ಲಿಯೂ ನನಗೆ ಓದುವಾಗ ಕಾಟ ಕಾಡತೊಡಗಿತು. ಆದರೆ ಇದನ್ನು ನಾನು ಯಾರ ಬಳಿಯೂ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಅವರ ಕೆಟ್ಟ ದೃಷ್ಟಿಯ ಎದುರು ದಿಟ್ಟಿಸಿ ನಿಲ್ಲಲು ಆರಂಭಿಸಿದೆ. ಅಲ್ಲದೆ ನನ್ನಲ್ಲಿ ನನ್ನ ಓದಿನ ಬಗೆಗೆ ಆತ್ಮವಿಶ್ವಾಸ ಇದ್ದುದರಿಂದ ಅದು ನನ್ನಲ್ಲಿನ ಕೀಳರಿಮೆಯನ್ನು ಕಿತ್ತೆಸೆಯಿತು. ಅದರೊಂದಿಗೆ ನಾನು ಅನೇಕ ಗೆಳತಿಯರನ್ನು ಪರಿಚಯ ಮಾಡಿಕೊಳ್ಳತೊಡಗಿದೆ. ಇದರಿಂದಾಗಿ ಅವರ ವಿಚಾರಗಳು ನನಗೆ ದೊರೆಯಿತು. ಅಷ್ಟೆ ಅಲ್ಲದೆ ನನಗೆ ಅನೇಕ ಸಂದರ್ಭಗಳಲ್ಲಿ ನೆರವಾದರು. ಉದಾಹರಣೆಗೆ ಒಮ್ಮೆ ನಮ್ಮ ಬಸ್ ಮಧ್ಯದಲ್ಲಿ ಹಾಳಾಗಿ ನಿಂತಾಗ ನಂಗೆ ಕಾಲೇಜ್ ಗೆ ತಡವಾಗಿದ್ದರಿಂದ ಏನು ಮಾಡಬೇಕೆಂದು ತೋರಲಿಲ್ಲ. ಆಗ ಅವರು ನನ್ನನ್ನು ಅವರೊಟ್ಟಿಗೆ ಬೇರೊಂದು ಬಸ್ನಲ್ಲಿ ಕರೆದುಕೊಂಡು ಹೋದರು. ಹೇಗೆ ನಮ್ಮ ಬಸ್ ಗೆಳೆತನ ನಮ್ಮ ಕಷ್ಟದ ಸಮಯದಲ್ಲಿ ಸಹಾಯವಾಯಿತು.

ಒಟ್ಟಾರೆಯಾಗಿ ನಾನು ಆರಂಭದಲ್ಲಿ ಬಸ್ ಪಯಣವನ್ನು ಇಷ್ಟ ಪದದಿರಲು ಕಾರಣ ನಾನು ಪ್ರತಿ ಕ್ಷಣವನ್ನು ಅನುಭವಿಸದೇ ಇರುವುದು. ಈಗ ನಾನು ಕಂಡುಕೊಂಡ ಅಂಶವೇನೆಂದರೆ ನಮ್ಮ ಸಂತೋಷ ದುಃಖಗಳು ಅವಲಂಬಿಸಿರುವುದು ನಮ್ಮ ಮನೋಭಾವದ ಮೇಲೆ. ಅಂದರೆ ನಾವು ಪ್ರತಿಯೊಂದು ಕ್ಷಣವನ್ನು ಅನುಭವಿಸಲು ಕಲಿತರೆ ನಮ್ಮ ಜೀವನ ಸುಖಕರವಾಗಿರುತ್ತದೆ.

----- ರಮ್ಯ ರಾವ್